ಕಂಗಳಿಗೆ ಹಬ್ಬವಾಯಿತಯ್ಯಾ..
ಮಂಗಳಾತ್ಮಕ ಪುರಂದರ ದಾಸರನು ಕಂಡು...||
ಸಕಲ ತೀರ್ಥ ಯಾತ್ರೆ ಮಾಡಿದ ಫಲವು
ಸಕಲ ಸತ್ಕರ್ಮ ಸಾಧಿಸಿದ ಫಲವು
ಭಕುತಿಯಿಂ ಭಾಗಿರಥಿ ಮಜ್ಜನದ ಫಲವು
ರುಕುಮಿಣಿ ಪತಿಯ ಪದಭಜಕರನ್ನು ಕಂಡು...|| ೧ ||
ಇವನ ನರನೆಂದವರು ನರಕದಲಿ ಬೀಳುವರು
ಕವಿಜನರು ಒಪ್ಪಿ ಕೈ ಹೊಡೆದು ಹೇಳಿದರು
ಅವನಿಯೊಳು ಅತಿ ದುರ್ಲಭಾವು ನಂದಗೋಪನ
ಕುವರನಿದ್ದೆಡೆ ವೈಕುಂಠ ವೆಂಬುವರ ಕಂಡು..... || ೨ ||
ಧನ್ಯನಾದೆನು ನಾನೂ ಮನುಜ ಜನ್ಮದಿ ಪುಟ್ಟಿ
ಮಾನ್ಯನಾದೆನು ಇನ್ನು ಈ ಜಗದೊಳಗೆ
ಪನ್ನಂಗ ಶಯನ ಶ್ರೀ ಕೃಷ್ಣನ ದಾಸರನು
ಚೆನ್ನಾಗಿ ಸ್ಮರಿಸಿ ಪಾವನನಾದೆನಿಂದು.... || ೩ ||
ರಚನೆ:ವ್ಯಾಸರಾಯ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ